ರೇಖಾಚಿತ್ರ: ಪ್ರಸನ್ನ ನಂಜಾಪುರ
ನಿನ್ನ ಗೌರವರ್ಣದ ಪ್ರೀತಿ ತುಂಬಿದ ಮುಖ
ಅದೇಕೋ ಬಿಡದೆ ಕಾಡುತ್ತಿದೆ ಎನ್ನನು!
ಮರೆತೆನೆಂದರೆ ಮರೆಯಲಾಗದ ಆ ಬಿಂಬ
ಕೂಗಿ
ಕರೆಯುತ್ತಿರುವ ಅಂದದ ಪ್ರತಿಬಿಂಬ.
ನಿನ್ನ ಪ್ರೀತಿಯ ಆರಾಧಕನಷ್ಟೆ ನಾನು
ನಿನ್ನೊಲುಮೆಯ ಕಾಯ್ವ ಚಕೋರನಂತೆ
ಎಡಬಿಡದೆ ಕಾಯುವ ಎಳೆಗರು.
ಲೋಕದಲಿ ವಿನಾ: ಮರುಗುವ ಮಂದಿಯನು ನಾ ಬಲ್ಲೆ
ಅವರಿಗಾಗಿ ಮನದಲ್ಲೇ ಮರುಕವೇಕೆ…?
ನಿನ್ನ ಗೌರವರ್ಣದ ಪ್ರೀತಿ ತುಂಬಿದ ಮುಖ
ಅದೇಕೋ ಬಿಡದೆ ಕಾಡುತ್ತಿದೆ ಎನ್ನನು!
ಮರೆತೆನೆಂದರೆ ಮರೆಯಲಾಗದ ಆ ಬಿಂಬ
ಕೂಗಿ
ಕರೆಯುತ್ತಿರುವ ಅಂದದ ಪ್ರತಿಬಿಂಬ.
ನೀ ತಿಳಿದಂತೆ ನಾನಿಲ್ಲ ಓ ನೀರೆ
ನಿನ್ನೊಲುಮೆಯ ಕಾಯ್ವ ಚಕೋರನಂತೆ
ಎಡಬಿಡದೆ ಕಾಯುವ ಎಳೆಗರು.
ಲೋಕದಲಿ ವಿನಾ: ಮರುಗುವ ಮಂದಿಯನು ನಾ ಬಲ್ಲೆ
ಅವರಿಗಾಗಿ ಮನದಲ್ಲೇ ಮರುಕವೇಕೆ…?
ನಿನ್ನ ಮಿಡಿಯುವ ಹೃದಯಕ್ಕಾಗಿ ನನ್ನ ಬಯಕೆ
ಮರುಕಬಿಟ್ಟು ನೀ ದೊರಕೆಂಬುದೆ ಎನ್ನ ಅರಿಕೆ.
ಸಕಾರಣವಿಲ್ಲದೆ ವಿಕಾರಗೊಳಿಸುವ
ವಿಕೃತ ಮನಸ್ಸುಗಳ ವಿಕಲತೆಗೆ
ಅವಿವೇಕದ ಅಂಜುಬುರುಕುತನ
ತರವೆ..?
ಪವಿತ್ರ ಪ್ರೇಮದ ಹರಣವೆ…..?
ನನ್ನಂತರಂಗದ ತುಡಿತ-ಮಿಡಿತಗಳು
ಬರಡು ಬಿನ್ನಾಣದ ಬಯಕೆಗಳಲ್ಲ
ಮರುಭೂಮಿಯ ಖರ್ಜೂರದಂತೆ
ಹುಣ್ಣಿಮೆಯ ಚಂದಿರನ ಬೆಳದಿಂಗಳ ಸುಧೆಯಂತೆ
ಯೋಚಿಸು.. ಯೋಚಿಸು.. ಆಲೋಚಿಸು…..
ಯೋಚನೆಯಷ್ಟೆ ನಿನಗೆ
ಯಾತನೆಯಲ್ಲಾ ನನಗೆ………..