Tuesday, 27 August 2013

ಶ್ವೇತಾರಾಣಿ ಯವರ ಹೊಸ ಕವಿತೆ 'ಒಳಗುದಿ'.......


ದಿನ ಬಿದ್ದ ಕಣ್ಣಿರ ಬಿಂದುಗಳು
ಹೀಗೆ ಬದುಕನ್ನು ಕೊಚ್ಚಿಕೊಂಡು ಹೋದವೆ?
ಯಾಕಾದರೂ ಬಂದಿತು ದಿನ, ಸಮಯ


ತಾಳಿ, ಗಟ್ಟಿಮೇಳ, ರೆಶಿಮೆ
ಸೀರೆಗಳ ಸರಪರ ಸದ್ದಿನ ಗಾನ
ಪುನರ್ವಸು ಪುಷ್ಯದ ಸಡಗರಕ್ಕೆ
ಎಲ್ಲಿ ಕಾಣಬೇಕು ಕಣ್ಣೀರ ಬಿಂದುಗಳು

ಮರದ ಬಂಡಿಯ ಕುಲುಕಾಟ
ಪಯಣೀಸಲೇ ಬೇಕು,ಇರಲಿ......ಇಲ್ಲದಿರಲಿ
ಒಳ ಒಳಗೆ ಚಿತಾಗ್ನಿ, ಹೊರಗೆ
ಮೌನ ಮೀರಿ ನಗದಿದ್ದರೆ ?

ಬಿರುಗಾಳಿಗೂ ಮುನ್ನ ಮೌನ
ಒಮ್ಮೊಮ್ಮೆ ಭೂಮಿ ಸವರಿದಂತೆ ಬೀಗಬೇಕು
ಕಟ್ಟಿದ ಕನಸುಗಳೆಷ್ಟೋ ? ಬಯಕೆಗಳಿಗೆ
ಲೆಕ್ಕವಿಟ್ಟವರಾರು ?

ಒಳಗೆ ಸುಂಟರಗಾಳಿಯ ಮೊರೆತ
ಹೊರಗೆ ಲಾವಣ್ಯದ ಲಾಲಸ್ಯದ ನಗು
ಎಲ್ಲಿ ಕಾಣಬೇಕು ? ನನ್ನೊಳಗಿನ ಕಣ್ಣೀರು

1 comment:

ನಾರಾಯಣ್ ಕೆ ಕ್ಯಾಸಂಬಳ್ಳಿ. said...

ಶೇತಾ ನಿಮ್ಮ ಕವಿತೆ ತುಂಭಾ ಚನ್ನಾಗಿದೆ.
ಈ ಕವಿತೆಯ ಪ್ರತಿ ಸಾಲುಗಳು ಹೆಣ್ಣಿನ ಅಂತರಂಗವನ್ನು ಕುರಿತು ಮಾತನಾಡುತ್ತಿವೆ.